ರಾಜಕೀಯ ಸಮಗ್ರ ಸುದ್ದಿ

ಜೈಲಿನಿಂದ ಸರ್ಕಾರ ನಡೆಸಲು ನಿಷೇಧ ಇದ್ದರೆ ನೀವು ತೋರಿಸಿ: ಹೈಕೋರ್ಟ್

Share It

ದೆಹಲಿ: ಮದ್ಯ ನೀತಿ ಹಗರಣದಲ್ಲಿ ಬಂಧನಕ್ಕೀಡಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಆ ಹುದ್ದೆಯಿಂದ ವಜಾ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ.

“ಜೈಲಿನಿಂದ ಸರ್ಕಾರ ನಡೆಸಲು ನಿಷೇಧ ಅಥವಾ ತಡೆ ಇದ್ದರೆ ನೀವು ತೋರಿಸಬಹುದೇ? ಒಂದು ವೇಳೆ ಸಂವಿಧಾನಾತ್ಮಕ ವೈಫಲ್ಯ ಇದ್ದರೆ ರಾಷ್ಟ್ರಪತಿ ಅಥವಾ ಲೆಫ್ಟಿನೆಂಟ್ ಜನರಲ್ ಕ್ರಮ ಕೈಗೊಳ್ಳುತ್ತಾರೆ, ನಾವಲ್ಲ. ಈ ವಿಷಯವನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಲೆಫ್ಟಿನೆಂಟ್ ಗವರ್ನರ್ ಹೇಳಿರುವುದನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ಆ ಬಳಿಕ ಇದು ರಾಷ್ಟ್ರಪತಿಗಳ ಬಳಿಗೆ ಹೋಗಲಿದೆ” ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇದಕ್ಕೆ ನ್ಯಾಯಾಲಯ ಹೇಗೆ ಕೈ ಹಾಕಲು ಸಾಧ್ಯ ಎಂದು ಅರ್ಜಿದಾರರನ್ನು ಕೋರ್ಟ್ ಪ್ರಶ್ನಿಸಿದೆ. “ಒಂದಷ್ಟು ಕಷ್ಟಗಳು ಆಗಬಹುದು. ನಿರ್ದಿಷ್ಟವಾಗಿ ಇದು ತೀರಾ ತ್ರಾಸದಾಯಕ. ಅವೆಲ್ಲವನ್ನೂ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಈ ವಿಚಾರದಲ್ಲಿ ನ್ಯಾಯಾಂಗ ಹಸ್ತಕ್ಷೇಪಕ್ಕೆ ಅವಕಾಶವಿದೆಯೇ?” ಎಂದು ಮುಖ್ಯ ನ್ಯಾಯಮೂರ್ತಿ ಮನಮೋಹನ ಮತ್ತು ನ್ಯಾಯಮೂರ್ತಿ ಮನ್ಮೀತ್ ಪಿ.ಎಸ್.ಅರೋರಾ ಅವರಿದ್ದ ನ್ಯಾಯಪೀಠ ಸ್ಪಷ್ಟಪಡಿಸಿದೆ.


Share It

You cannot copy content of this page